“ಬರಹಗಾರ್ತಿ” ಇನ್ನೂ ನಾನಾಗಿಲ್ಲ!
“ಬರಹಗಾರ್ತಿ” ಇನ್ನೂ ನಾನಾಗಿಲ್ಲ
ಬರೆಯಬೇಕೆಂದು ನನಗೆ ಹಂಬಲ
ಇದು ಎಂದು ಪೂರೈಸುವುದೋ ಗೊತ್ತಿಲ್ಲ
ಇದು ನನ್ನ ಜನ್ಮದ ಜಂಟಿಲ.
ನೆನೆದೆನು ಗಣಪನ ಮನದಲಿ
ನೂರೆಂಟು ವಿಜ್ಞಗಳು ಬಾರದಿರಲಿ
ಆಶೀರ್ವದಿಸು ನೀ ಈ ಗಳಿಗೆಯಲಿ
ಆಗ ಸಾಗುವುದು ಕಾರ್ಯವು ಸುಗಮದಲಿ.
ಕನ್ನಡವ ಕಾಪಾಡಲು
ಹಪಹಪಿಸಿ ಹೊರಟಿರಲು
ಕನ್ನಡಾಂಬೆಯ ಕೇಳುತಲಿ
ಹರಸಿದಳು ಹರುಷದಲಿ.
ನೀ ಕ್ಷಮಿಸು ಓದುಗನೆ ತಪ್ಪುಗಳನು
ನಾ ಕಲಿವೆ ತಪ್ಪಿನಿಂದ ಪಾಠಗಳನು
ಅನುಭವದಿಂದ ಆಗುವೆನು ಉತ್ತಮನು
ಅನುಸರಿಸಿ ನೀ ಓದು ನನ್ನೀ ನನಸನು.
ಕಥೆಯನು ಕಥಿಸುವೆನು
ಹಾಸ್ಯವನು ಹರಿಸುವೆನು
ಕವನವನು ಕಲ್ಪಿಸುವೆನು
ಲೇಖನವನು ಲಿಖಿಸುವೆನು.
ಈ ಕವನ “ದಟ್ಸ್ ಕನ್ನಡ” ತಾಣದಲ್ಲಿ ಪ್ರಕಟವಾಗಿದೆ.